
ಕಾಳು ಬೇಕು, ಕೂಳು ಬೇಕು...ಎಲ್ಲ ಬೇಕು


ಮೇಕೆಮರಿಯೂ ಬಾಯಿ ಹಾಕಿ ಹುಲ್ಲು ತಿಂತಿದೆ
************
Please do not use my pictures and videos from this blog without my consent. Thank you.



ಮೇಕೆಮರಿಯೂ ಬಾಯಿ ಹಾಕಿ ಹುಲ್ಲು ತಿಂತಿದೆ
************
ನಿಶು ಅಮ್ಮನಿಗೆ ನಿಂತಲ್ಲಿ ಕೂತಲ್ಲಿ ಹಾಡು ಗುನುಗುತ್ತಾ ಇರೋ ಅಭ್ಯಾಸ. ಹಾಗೆ ಅಮ್ಮ ಗುನುಗೋ ಭಾವಗೀತೆ, ಚಿತ್ರಗೀತೆ, ವಚನ, ದೇವರನಾಮ ಎಲ್ಲವನ್ನೂ ಸಲೀಸಾಗಿ ಕದ್ದು ಇದ್ದಕ್ಕಿದ್ದಂತೆ ಒಂದು ದಿನ ಪೂರಾ ಹಾಡು ಹೇಳಿ ಅಮ್ಮ, ಅಪ್ಪ ಇಬ್ಬರಿಗೂ ಸರ್ಪ್ರೈಸ್ ಕೊಡೋದು ನಿಶು ಹವ್ಯಾಸ. ಹಾಡಿನ ಜೊತೆಗೆ, ಎಲ್ಲ ಹಾಡನ್ನೂ ಡ್ಯಾನ್ಸ್ ಮಾಡುತ್ತಾ ಹೇಳೋದು ಅದು ಹ್ಯಾಗೋ ನಿಶೂಗೆ ತುಂಬಾ ತುಂಬಾ ಇಷ್ಟ. ಹೀಗಾಗಿ ಕಲಿತ ಹಾಡಿಗೆಲ್ಲ ಅರ್ಥ ಕೇಳಿ ತಾನೇ ಕೋರಿಯೋಗ್ರಫಿ ಮಾಡಿಕೊಳ್ಳೋದುಂಟು. ಇವನ ಈ ಹಾಡು, ಅಭಿನಯ, ಅರ್ಥವಂತಿಕೆಯೆಲ್ಲಾ ನಿಮ್ಮ ಜೊತೆ ಹಂಚಿಕೊಳ್ಳೋ ಖುಷಿ ನನ್ನದು!
ಬಸವಣ್ಣನವರ ಈ ವಚನ ನನಗೂ ನಿಶೂಗೂ ತುಂಬಾ ಇಷ್ಟ. ಅಭಿನಯಿಸುತ್ತಾ ಹೇಳುವಾಗ, ಅರ್ಥ ವಿವರಿಸುವಾಗ ಅದು ಹ್ಯಾಗೋ ಮಧ್ಯ ನುಸುಳುತ್ತಿದ್ದ ಸಿಲ್ಲಿ ಗಿಗಲ್ಗಳಿಗೆಲ್ಲ ಕತ್ತರಿ ಹಾಕಿದ್ದಾಗಿದೆ. `ಕಲಬೇಡ ಕೊಲಬೇಡ' ಅಂತ ಹಾಡುತ್ತಾ ಮಧ್ಯೆ ಮಧ್ಯೆ ನಿಶು ಮೂಗಿಗೆ ಬೆರಳಿಡಲು ಶುರು ಮಾಡುತ್ತಿದ್ದಂತೆ `ಮೂಗೊಳಗೆ ಬೆರಳಿಡಬೇಡ' ಅಂತ ಅಮ್ಮ ಹಾಡಿದ್ದೂ ಎಡಿಟ್ ಆಗಿದೆ. ಈಗ ನೀವೂ ಈ ವಚನ ಕೇಳಿ, ನೋಡಿ......
ದೀಪಾವಳಿ ಶುಭಾಶಯಗಳು ನಿಮ್ಮೆಲ್ರಿಗೂ....

........ಹತ್ರ ಹೋಗಿ, ಗುಟ್ಟು ಹೇಳಿ...........
.........ಸಿಕ್ಕೇಬಿಟ್ಟ ಅನ್ನುವಾಗ..ನಾನೇನ್ಮಾಡ್ತೀನ್ ಗೊತ್ತಾ?.......
.......ಹಾಗೇ ಹಿಂದಕ್ಕೆ ಬಗ್ಗಿ.................
........ಪಲ್ಟಿ ಹಾಕಿಬಿಡ್ತೀನಿ........
..... ನಾನೇ ಗೆದ್ದಿದ್ದೂ!!!
ಜಯಂತ್ ಅಂಕಲ್ ಅಮ್ಮಂಗೂ ಫ್ರೆಂಡ್ ಅಂತೆ...
ಅತ್ತೆ, ಮಾವಾನೂ ಅವರ ಜೊತೆ ಫೋಟೋ ತೆಗೆಸಿಕೊಂಡ್ರು....
ಆದ್ರೆ ಅವ್ರು ನನ್ ಜೊತೇನೇ ಜಾಸ್ತಿ ಫೋಟೋ ತೆಗೆಸಿಕೊಂಡಿದ್ದು
ಎಲ್ಲಾರ್ಗಿಂತ ಅವ್ರು ನಂಗೇ ಜಾಸ್ತಿ ಫ್ರೆಂಡು
ಜಯಂತ್ ಅಂಕಲ್ನೇ ಕೇಳಿ ನೋಡಿ ಬೇಕಿದ್ರೆ!
*******
Special thanks to :
ನಿಶು ಬ್ಲಾಗಲ್ಲಿ ಈ ಚಿತ್ರಗಳನ್ನ ಹಾಕಬಹುದಾ ಅಂತ ಕೇಳಿದ್ದಕ್ಕೆ, ಒಂಚೂರೂ ತಡಮಾಡದೆ `ಓಕೆ' ಹೇಳಿದ ಜಯಂತ್ ಮತ್ತು ಸ್ಮಿತಾಗೆ.


...ಮತ್ತು.....ಹೀಗೂ ಇರತ್ತಂತೆ.






ಇಂಗ್ಲಿಷ್ನಲ್ಲಿರೋ ಈ ಕರಡಿ ಹಾಡು ಕನ್ನಡದಲ್ಲಿ ಹೀಗಾಗಬಹುದೇನೋ ಅನ್ನಿಸ್ತು. ನಿಮಗೆ ಏನನ್ನಿಸ್ತು? ಕನ್ನಡದಲ್ಲಿ ಈ ಮುಂಚೇನೂ, ಸುಮಾರು ಹೀಗೇ ಇದ್ದ ಕರಡಿ ಹಾಡೊಂದು ಎಲ್ಲೋ ಕೇಳಿದ್ದ ನೆನಪು. ನಿಮ್ಮಲ್ಲಿ ಯಾರಿಗಾದ್ರೂ ಆ ಹಾಡು ಗೊತ್ತಿದ್ರೆ ತಿಳಿಸಿ.

ನೀರು ಮೇಲೆ ಬರಲಿಕ್ಕೆ ಹೂಜಿ ತುಂಬಾ ಕಲ್ಲು ತಂದು ಹಾಕಿದ ಜಾಣ ಕಾಗೆಯ ಹಾಗೇ ನರಿ ಹೊಗಳಿದ್ದಕ್ಕೆ ಬಾಯಿಬಿಟ್ಟು, ಕಜ್ಜಾಯ ಕಳೆದುಕೊಂಡ ಕಾಗೆಯೂ ನನಗಿಷ್ಟ. ಹಾಗೆ ಕಾಗೆ ಇಷ್ಟವಾಗಲಿಕ್ಕೆ ಕಾರಣ, ಚಿಕ್ಕವಳಿದ್ದಾಗ ನಾನು ಓದಿದ ರಾಜರತ್ನಂರ ಕಾಗೆಯ ಕುರಿತ ಪದ್ಯ ಮತ್ತು ನಂತರದ ದಿನಗಳಲ್ಲಿ ಮೆಚ್ಚಿಕೊಂಡ ಆರ್. ಕೆ. ಲಕ್ಷ್ಮಣರ ಕ್ಯಾರಿಕೇಚರ್ ಕಾಗೆ. ಈಗ ಹತ್ತು ವರ್ಷಗಳ ಕೆಳಗೆ ಪನ್ನೇರಳೆ ಹಣ್ಣಿಗಾಗಿ ಮರ ಹತ್ತಿ, ಅದೇ ಮರದಲ್ಲಿ ಗೂಡು ಕಟ್ಟಿದ್ದ ಕಾಗೆಯೊಂದರ ಕೈಲಿ(ಕೊಕ್ಕಲ್ಲಿ!) ಬೆರಳಿಗೆ ಕುಟುಕಿಸಿಕೊಂಡು ಗಾಯ ಮಾಡಿಕೊಂಡಿದ್ದು ನೆನಪಾಗ್ತಿದೆ. ಆ ಕಾಗೆಯಂತೂ ಲಕ್ಷ್ಮಣರ ಕಾಗೆಗಿಂತ ಹೆಚ್ಚಿನ ಪರ್ಸನಾಲಿಟಿ ಹೊಂದಿತ್ತು ಅನ್ನಿಸ್ತಿದೆ.
ರಾಜರತ್ನಂ ಪದ್ಯ ಇಲ್ಲಿದೆ:
ಕರ್ರಗಿರುವ ಕಾಗೆಯೊಂದು,
ಭರ್ರ್ ಎಂದು ಹಾರಿ ಬಂದು,
ಸರ್ರ್ ಎಂದು ಸುತ್ತಿ ತಿರುಗಿ
ಕೆಳಗೆ ನೋಡಿತು.
ಸರ್ರ್ ಎಂದು ಸುತ್ತಿ ತಿರುಗಿ,
ಜರ್ರ್ ಎಂದು ಜಾರುವಾಗ,
ಪರ್ರ್ ಎಂದು ಅದರ ರೆಕ್ಕೆ
ಹರಿದು ಹೋಯಿತು.
ದ್ವಿತೀಯಾಕ್ಷರ ಪ್ರಾಸದ ಈ ಪದ್ಯ ನನಗೂ, ನಿಶೂಗೂ ಅಚ್ಚುಮೆಚ್ಚು. `ಕಂದನ ಕಾವ್ಯ' ಅನ್ನೋ ಹೆಸರಿನ ಪುಸ್ತಕದಲ್ಲಿರೋ ಈ ಪದ್ಯವನ್ನ ನನಗೆ ನೆನಪಲ್ಲಿ ಇರುವ ಹಾಗೆ ಬರೆದಿದ್ದೀನಿ. ಇದರ ಸರಿಯಾದ ಪಾಠ ಯಾರಿಗಾದರೂ ಗೊತ್ತಿದ್ದಲ್ಲಿ ಕಳುಹಿಸಿಕೊಡಿ.
*****
ಈ ಕಾಗೆ ಪದ್ಯ ನನಗೆ ನೆನಪಾಗಲಿಕ್ಕೆ ಕಾರಣರಾದವರು, ನಿಶುಮನೆಗೆಂದು ತಮಗೆ ಸಿಕ್ಕ ಪದ್ಯವೊಂದನ್ನ ನನಗೆ ಕಳುಹಿಸಿಕೊಟ್ಟ ಶೀಲಾ. ಅವರಿಗೆ ಧನ್ಯವಾದ. `ಕ' ಅಕ್ಷರದ ಕಾಗುಣಿತವನ್ನ ಆಧರಿಸಿ ಬರೆದಿರುವ ಈ ಪದ್ಯದ ಕಡೆಯ ಸಾಲಿನ ಅರ್ಥ ನನಗೆ ತಿಳಿಯಲಿಲ್ಲ. 'ಕಃಫಿಕ' ಎಂದರೆ ಏನೆಂದು ನನಗೆ ಗೊತ್ತಿಲ್ಲ. ಕಡೆಯ ಸಾಲಿನಲ್ಲಿ 'ಕಃ' ಬರಬೇಕೆಂಬ ಕಾರಣಕ್ಕೆ ಹಾಗೆ ಬರೆದಿದ್ದಾರ? ನಿಮಗ್ಯಾರಿಗಾದರೂ ಗೊತ್ತಿದ್ದರೆ ತಿಳಿಸಿಕೊಡಿ
****
ಶೀಲಾ ಅವರು ನನಗೆ ಬರೆದದ್ದು ಇಲ್ಲಿದೆ:
ಮೀರಾ, ಇದು ನನಗ "ಸುಧಾ" ಪತ್ರಿಕೆಯಲ್ಲಿ ಸಿಕ್ಕಿತು. ಓದಿದ ಕೂಡಲೆ ನಿಮ್ಮ ನೆನಪಾಯಿತು. ಇಲ್ಲಿ ಅಂಟಿಸಿದ್ದೇನೆ. ಆಕರ್ಷಕವಾಗಿ ಮಾಡಿ ನಿಮ್ಮ ಬ್ಲಾಗಿನಲ್ಲಿ ಹಾಕುವುದಾದರೆ ಹಾಕಿ.
